CONTACT US ಸೇವಾ ವಿವರಗಳು ದರ್ಶನ ಸಮಯಗಳು ಶ್ರೀ ಶಂಕರನಾರಾಯಣ ದೇವಸ್ಥಾನ imgs
1 / 6
2 / 6
3 / 6
4 / 6
5 / 6
6 / 6

ಶ್ರೀ ಶಂಕರನಾರಾಯಣ ದೇವಸ್ಥಾನ
ಶ್ರೀ ಶಂಕರನಾರಾಯಣ ದೇವಸ್ಥಾನ
ಶ್ರೀ ಶಂಕರನಾರಾಯಣ ದೇವಸ್ಥಾನ
ಶ್ರೀ ಶಂಕರನಾರಾಯಣ ದೇವಸ್ಥಾನ
ಶ್ರೀ ಶಂಕರನಾರಾಯಣ ದೇವಸ್ಥಾನ
ಶ್ರೀ ಶಂಕರನಾರಾಯಣ ದೇವಸ್ಥಾನ

ತ್ರಿಮೂರ್ತಿಗಳು ಲಿಂಗರೂಪದಲ್ಲಿ ಉದ್ಭವಿಸಿ ಭಕ್ತರಿಂದ ಶಂಕರನಾರಾಯಣ ಮತ್ತು ಬ್ರಹ್ಮಲಿಂಗ ಮಹಾಗಣಪತಿ ಎಂದು ಆರಾಧಿಸಲ್ಪಡುವ ಈ ಸೀಮೆದೇವಸ್ಥಾನ ಹಲವು ವೈಶಿಷ್ಟ್ಯಗಳ ಸಂಗಮಕ್ಷೇತ್ರ. ಮಂಜೇಶ್ವರ-ಪುತ್ತೂರು ಮಾರ್ಗದಲ್ಲಿ ಮಜಿರ್ಪಳ್ಳ ಎಂಬಲ್ಲಿಂದ ಬಲಕ್ಕೆ ಎರಡು ಕಿಲೋಮೀಟರ್ಬಂದಾಗ ಉಲ್ಯಾಲೆಯಾಡುವ ಕಲ್ಪವೃಕ್ಷ, ಕತ್ತೆತ್ತಿನೋಡಿದರೆ ಒತ್ತೊತ್ತಿನಿಂತಿರುವ ಪಕೃತಿದತ್ತ ಪರ್ವತಗಳ ಕೋಟೆ, ಕಂಗು, ಬಾಳೆ ,ಹಸಿರುತೋರಣ, ಪೈರುಪಚ್ಚೆ ನಡುವೆ ಭವ್ಯ ದೇಗುಲ ಕಣ್ಮನಸೆಳೆಯುತ್ತದೆ. ಶಿಲೆಯೊಂದು ಕಲಾತ್ಮಕವಾಗಿ ಶಂರನಾರಾಯಣರೂಪದಲ್ಲಿ ಯುದ್ಭವಿಸಿದ್ದು, ಪಕ್ಕದಲ್ಲೇ ಬ್ರಹ್ಮದೇವರ ಸಾನಿಧ್ಯವಿದೆ. ಬ್ರಹ್ಮನಿಗೆ ಪೂಜೆ ಇಲ್ಲವೆಂಬಕಾರಣಕ್ಕೆ ಮಹಾಗಣಪತಿಯನ್ನು ಆವಾಹಿಸಿ ಪೂಜೆಪುರಸ್ಕಾರಗಳು ನಡೆಯುತ್ತದೆ.ಒಂದು ಶಿಲೆಯಲ್ಲಿ ಎರಡುಶಕ್ತಿ ಇರುವ ದೇವಾಲಯ ಅಖಂಡಭಾರತದಲ್ಲಿ ಸಿಗುವುದು ಎರಡು ಮಾತ್ರ. ಒಂದು ಕೋಳ್ಯೂರು ಇನ್ನೊಂದು ಕುಂದಾಪುರದ ಕ್ರೋಡ ಶಂಕರನಾರಾಯಣಸನ್ನಿಧಿ.... ಸೀಮೆಯು ಹದಿಮೂರು ಗ್ರಾಮಗಳ ಆಸ್ತಿಕ ಕುಟುಂಬಗಳ ಜನತೆ ಕ್ಷೇತ್ರವನ್ನು ನಂಬಿರುವ ಭಕ್ತಸಾಗರ ಕೇರಳ ಹಾಗು ಕರ್ನಾಟಕದ ವಿವಿಧೆಡೆ ಹಂಚಿ ಹೋಗಿದ್ದಾರೆ. ಬಹುತೇಕ ಎಲ್ಲರೂ ಮಂಡಲಪೂಜೆಗೆ ಶ್ರೀದೇವರದರ್ಶನಕ್ಕೆ ಬರುತ್ತಾರೆ. ದೇವಾಲಯದ ವಾಸ್ತುಶಿಲ್ಪ ಹಾಗೂ ಆರಾಧನಾ ವಿಧಾನಗಳಿಂದ ದೇವಾಲಯ ಹದಿನೈದು ಶತಮಾನದ ಇತಿಹಾಸವನ್ನು ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ದೀಪಾವಳಿಯ ಅಮಾವಾಸ್ಯೆಯಂದು ನಡೆಯುವ ದೀಪಾವಳಿಉತ್ಸವ, ವೃಶ್ಚಿಕ ಸಂಕ್ರಮಣದಂದು ನಡೆಯುವ ಲಕ್ಷದೀಪೋತ್ಸವ, ಧನುರ್ಮಾಸದ ( ....)(24) ರಂದುನಡೆಯುವ ಮಂಡಲಪೂಜೆ, ಶೀವರಾತ್ರಿ ಮತ್ತು ವೃಷಭ ಮಾಸದ 10 ರಂದುನಡೆಯುವ ( ಪತ್ತಿ*)ನಾವದಿ ಉತ್ಸವ ಈ ಕ್ಷೇತ್ರದ ಪಂಚಮಹಾಪರ್ವಗಳು. ಪತ್ತನಾಜೆಯಂದು ಮದ್ಯಾಹ್ನ ದೇವರ ಗರ್ಭಗುಡಿಯಲ್ಲಿ ಗಂಧಮೂಡುವುದು ಎಂಬ ವಿಶೇಷ ಸಂಪ್ರದಾಯ ಇಂದಿಗೂರೂಢಿಯಲ್ಲಿದೆ. ಅಂದು ಊರಜನರದುರಿತ ನಿವಾರಣೆಗಾಗಿ ಪ್ರಾರ್ಥಿಸಿ ಉದ್ಭವಲಿಂಗಗಳಿಗೆ ಗಂಧಲೇಪನಮಾಡಲಾಗುತ್ತದೆ. ಈ ಮೂಢಗಂಧವನ್ನು ಮರುದಿನ ರಾತ್ರಿ ಎಲ್ಲರಿಗೂ ಪ್ರಸಾದರೂಪದಲ್ಲಿ ನೀಡುತ್ತಾರೆ.ಇದು ಬಹುಪವಿತ್ರ ಹಾಗು ಸರ್ವರೋಗ ನಿವಾರಕ ಎಂಬ ನಂಬಿಕೆ ಇದೆ. ಲಕ್ಷ ದೀಪೋತ್ಸವ ಹಾಗು ಮಂಡಲ ಪೂಜೆಯ ಮಧ್ಯದ 48 ದಿನಗಳಲ್ಲಿ ಗ್ರಾಮದಲ್ಲೆಲ್ಲೂ ಶುಭಕಾರ್ಯ ಮಾಡುವಂತಿಲ್ಲ, ಪ್ರಾಣಿವಧೆನಿಷೇಧ. ದೇವಳ 1999 ರಲ್ಲಿ ಜೀರ್ಣೋದ್ಧಾರಗೊಂಡಿದ್ದು, ಇತ್ತೀಚೆಗೆ ಸಭಾಭವನದ ಕೆಲಸಕಾರ್ಯಗಳೂ ಪೂರ್ಣಗೊಂಡಿದೆ. ತುಲಾಭಾರ ಸೇವೆ ಇಲ್ಲಿ ಪ್ರಧಾನ. ವರ್ಷದಲ್ಲಿ ಒಂದು ದಿನಮಾತ್ರ ಈ ಸೇವೆ ನಡೆಯುವುದು ವಿಶೇಷ. ಬೋಳಂತಕೋಡಿ ರಾಮಭಟ್ ಅವರ ನೇತೃತ್ವದಲ್ಲಿ ದೇಗುಲನ ವೀಕರಣಗೊಂಡಿದೆ. ಉತ್ತಾರಕೊಡಂಗೆ ಪಠೇಲಕೃಷ್ಣಭಟ್ಟರು, ಅನುವಂಶಿಕ ಮೊಕ್ತೇಸರರಾದ ಕೃಷ್ಣತಾಳಿತ್ತಾಯ, ಚಕ್ರಕೋಡಿ ಮುತ್ತಪ್ಪ ಭಟ್ಟರು, ಮೊಗಸಾಲೆ ಕೃಷ್ಣಭಟ್ಟರು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಈಗ ವರ್ಕಾಡಿ ಹೊಸಮನೆ ವಾಸುದೇವತಾಳಿತ್ತಾಯ , ಮೊಗಸಾಲೆ ಕೇಶವಭಟ್ಟ, ಚಕ್ರಕೋಡಿ ಕೃಷ್ಣಭಟ್ಟ್ಸಾ ರಥ್ಯದಲ್ಲಿ ಕ್ಷೇತ್ರದ ಚಟುವಟಿಕೆಗಳು ನಡೆಯುತ್ತವೆ. ”ಅಪರೂಪದ ತ್ರಿಮೂರ್ತಿಕ್ಷೇತ್ರದಲ್ಲಿ ತುಲಾಭಾರ ಸೇವೆಯಂದ ಸಂತಾನಪ್ರಾಪ್ತಿ, ಕಷ್ಟಕೋಟಲೆಗಳ ಪರಿಹಾರ ನಿದರ್ಶನಲೆಕ್ಕವಿಲ್ಲದಷ್ಟು. ಪಾರಂಪರಿಕ ಮಹತ್ವ ಹಾಗು ಐತಿಹಾಸಿಕ ಹಿನ್ನೆಲೆ ಜೊತೆ ಕ್ಷೇತ್ರದ ಕಾರಣಿಕದಿಂದಾಗಿ ಶ್ರೀಕ್ಷೇತ್ರ ಭಕ್ತಕೋಟಿಯನ್ನು ಆಕರ್ಷಿಸುತ್ತಿದೆ. ” - ಬೋಳಂತಕೋಡಿರಾಮಭಟ್.(ಅದ್ಯಕ್ಷರು, ಜೀರ್ಣೋದ್ಧಾರಸಮಿತಿ.)